ಕೇವಲ ಮೂರು ತಾಸಿನೊಳಗೆ
ಯಾರಿಗೂ ತ್ರಾಸು ಕೊಡದೆ
ಇದ್ದಕ್ಕಿದ್ದಂತೆ, ಅವಸರದಲ್ಲಿ
ಎದ್ದುಹೋದುದು ಎಲ್ಲಿಗೆ
ಯಾವ ಮೋಹನ ಮುರಳಿ ಕರೆಯಿತು
ಯಾವ ತೀರಕೆ ನಿನ್ನನು
ಯಾರ ಮೇಲೀ ಮುನಿಸು
ಯಾಕೆ ನೊಂದಿತು ಮನಸು
ನಿನ್ನ ನಿರ್ಗಮನದಿಂದ
ಘಾಸಿಗೊಂಡ ಭಾನು ಕಳೆಗುಂದಿತು
ನಿರಂತರ ಸುರಿದ ಕಂಬನಿಗೆ
ಭೂಮಿ ಬಿರಿಯಿತು
ಮೇಘವರ್ಷದ ಈ ರಂಪಕ್ಕೆ
ಚಿತ್ರಗಳು ತತ್ತರಿಸಿದವು
ಏಕೀ ರುಷ್ಠತೆ……
ಹತ್ತಿರದ ಮನಸುಗಳ ಭೇದಿಸಿ
ಜತೆಬಿಟ್ಟು ಕತೆಬಿಟ್ಟು,
ಎತ್ತಣ ಪಯಣ!
ನಾಕವೆ ನರಕವೆ?
ಅಲ್ಲಿ ಏನಿದೆಯೆಂದು
ಯಾವ ಮರುಳಿಗೆ
ಇಲ್ಲಿಯ ನಂಟು, ಗಂಟು
ಬಂಧನಗಳ ತೊರೆದು
ತೋರಿಸಿದ ಅವಸರಕ್ಕೆ ಏನರ್ಥ
ಮರಳಿ ಬಾರದ, ಕಾಣದ
ಉಲಿಯದ ನಲಿಯದ ನಿರಾಕಾರಕ್ಕೆ
ನಿನ್ನ ನಿಯಮ, ನಿನ್ನ ನಮನಗಳು
ನಿನ್ನ ಭಾವಸುಮನಗಳಾಗಿ
ಆಕಾಶದ ನೆಲೆಯ ಶೋಧನೆಯಲ್ಲಿ ಹೊರಟದ್ದು
ಅದೆಂಥಾ ನಿರ್ವಾಣದೆಡೆಗೆ
ನಾನು- ನೀನಿಲ್ಲದ
ಭಾವಲೋಕದ ಅಂಚಿಗೆ….!
*****
Related Post
ಸಣ್ಣ ಕತೆ
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
-
ಅವರು ನಮ್ಮವರಲ್ಲ
ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
-
ಇನ್ನೊಬ್ಬ
ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…